ಹಾವೇರಿ : ಹಾವೇರಿ ಜಿಲ್ಲೆಯ ರಟ್ಟಹಳ್ಳಿ ತಾಲೂಕಿನ ಮಾಸೂರ್ ಗ್ರಾಮದ ಯುವತಿ ನರ್ಸ್ ಸ್ವಾತಿ ಮರ್ಡರ್ ಕೇಸ್ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಸ್ವಾತಿಯನ್ನು ಮದುವೆಯಾಗುವದಾಗಿ ನಂಬಿಸಿ ಮದುವೆಗೆ ನಿರಾಕರಿಸಿದ ಯುವಕನನ್ನು ಯುವತಿ ತರಾಟೆಗೆ ತೆಗೆದುಕೊಂಡಿದ್ದಳು,ಇದರಿಂದ ಕೋಪ ಗೊಂಡ ಯುವಕ ಆತನ ಸ್ನೇಹಿತರ ಜೊತೆಗೂಡಿ ಆಕೆಯನ್ನ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ಹಿನ್ನಲೆ : ಸ್ವಾತಿ ಮಾರ್ಚ್ 3ನೇ ತಾರೀಕು ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಮನೆಯಿಂದ ರಾಣೆಬೆನ್ನೂರು ಹೋಗಿದ್ದಳು. ತಾಯಿ ಮಧ್ಯಾಹ್ನ ಫೋನ್ ಮಾಡಿದಾಗ ಅಮ್ಮನಿಗೆ ಬರುವುದಾಗಿ ತಿಳಿಸಿದಳು. ತಾಯಿ ಮತ್ತು ಏಳು ಗಂಟೆಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ತಾಯಿಗೆ ಏಳನೇ ತಾರೀಕಿಗೆ ಮಿಸ್ಸಿಂಗ್ ಕೇಸ್ ದಾಖಲು ಮಾಡಿದಳು.
ಮಾ. 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಮೊದಲಿಗೆ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಹಲಗೇರಿ ಠಾಣೆ ಪೊಲಿಸರು ಯುವತಿ ಶವದ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಸಂಸ್ಕಾರ ಕೂಡಾ ಮಾಡಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿ ಹೋಗಿರೋದು ಗೊತ್ತಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಅದು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿದೆ.
ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಯಾಜ್ ಹಾಗೂ ವಿನಯ್, ದುರ್ಗಾಚಾರಿ ಎಂಬ ಯುವಕರೇ ಹತ್ಯೆಗೈದವರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸೋ ಸ್ಪರ್ಧೆ ಅಭಿಮಾನಿಗಳಾಗಿದ್ದರು. ಹೋರಿ ಬೆದರಿಸೋ ಸ್ಪರ್ಧೆ ಇದ್ದಲಿಗೆ ಸ್ವಾತಿ ಹಾಜರಾಗ್ತಿದ್ದಳು. ಈ ವೇಳೆ ನಯಾಜ್, ವಿನಯ್, ದುರ್ಗಾಚಾರಿ ನಡುವೆ ಸ್ನೇಹ ಬೆಳೆದಿತ್ತು.
ಬಳಿಕ ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಯಾಜ್, ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಅಂತ ಜಗಳ ಆಡಿದ್ದಳು. ಬಳಿಕ ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ವಿನಯ್ ಹಾಗೂ ದುರ್ಗಾಚಾರಿಗೆ ಈ ವಿಚಾರವನ್ನು ನಯಾಜ್ ತಿಳಿಸಿದ್ದ. ಸ್ವಾತಿ ಕಾಟ ಹೆಚ್ಚಾಗಿದೆ ಅವಳ ಕಥೆ ಮುಗಿಸಬೇಕು ಎಂದು ಮೂವರೂ ಮಾತಾಡಿಕೊಂಡಿದ್ದರು.
ಮಾ. 3ರಂದು ಆರೋಪಿಗಳು ಸ್ವಾತಿಗೆ ಫೋನ್ ಮಾಡಿ ಬರ ಹೇಳಿದ್ದರು. ಬಾಡಿಗೆ ಕಾರ್ ಮಾಡಿಕೊಂಡು ಬಂದು ಆಕೆಯನ್ನು ಆರೋಪಿಗಳು ಕಾರಿನಲ್ಲಿ ಕರೆದೊಯ್ದಿದ್ದರು. ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ ಕರೆದುಕೊಂಡು ಹೋಗಿದ್ದರು. ಬಾಡಿಗೆ ಕಾರಿನಲ್ಲಿ ರಟ್ಟಿಹಳ್ಳಿ ಬಳಿ ಇರುವ ಕಬ್ಬಿಣಕಂತಿ ಮಠದ ಬಳಿ ಪಾಳು ಬಿದ್ದಿರುವ ತರಳಬಾಳು ಶಾಲೆಗೆ ಕರೆದೊಯ್ದು ಕುತ್ತಿಗೆಗೆ ಟವಲ್ ಹಾಕಿ ಉರುಳು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಕಾರಿನ ಡಿಕ್ಕಿಯಲ್ಲಿ ಶವ ಸಾಗಿಸಿದ್ದು, ತುಂಗಭದ್ರಾ ನದಿಗೆ ಶವ ಬಿಸಾಡಿದ್ದರು.
ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಹಿಂದೂ ಸಂಘಟನೆಗಳಕಾರ್ಯಕರ್ತರಿಂದ ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹ ವ್ಯಕ್ತವಾಗುತ್ತಿದೆ.
ಹಾವೇರಿ ಎಸ್ಪಿ ಅಂಶುಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ ಮಾರ್ಚ್ 6 ರಂದು ನಮಗೆ ಅಪರಿಚಿತ ಶವ ಸಿಕ್ಕಿತ್ತು. ಮಾರ್ಚ್ 11 ರಂದು ಅದು ಸ್ವಾತಿ ರಮೇಶ್ ಬ್ಯಾಡಗಿ ಎಂಬುವವರ ಮೃತದೇಹ ಆಗಿತ್ತು ಎಂದು ಗೊತ್ತಾಗಿತ್ತು. ತನಿಖೆ ನಡೆಸಿದಾಗ ಮೂವರು ಆರೋಪಿಗಳ ಸುಳಿವು ಸಿಕ್ಕಿದೆ ಅದರಲ್ಲಿ ನಯಾಜ್, ವಿನಾಯಕ, ದುರ್ಗಾಚಾರಿ ಎಂಬ ಆರೋಪಿಗಳು ಕೊಲೆಯಲ್ಲಿ ನೇರ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಸ್ವಾತಿಗೆ ಮೂವರು ಪರಿಚಯಸ್ತರಾಗಿದ್ದು ಕೊಲೆಗೂ ಮುನ್ನ ರಾಣೆಬೆನ್ನೂರು ಬಳಿ ಸ್ವಾತಿ ಹತ್ತಿರ ಮಾತನ್ನಾಡಿದ್ದಾರೆ. ಕೆಲ ವಿಚಾರದಲ್ಲಿ ಇವರ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಬಳಿಕ ಸ್ವಾತಿಯನ್ನು ಕೊಲೆ ಮಾಡಿ ಕಾರಿನಲ್ಲಿ ಶವಸಾಗಿಸಿ ತುಂಗಭದ್ರಾ ನದಿಯಲ್ಲಿ ಬಿಸಾಡಿದ್ದಾರೆ. ನಯಾಜ್ನನ್ನು ಈಗಾಗಲೇ ಅರೆಸ್ಟ್ ಮಾಡಿದ್ದೀವಿ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು ಉಳಿದವರಿಗಾಗಿ ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
- ಹಾವೇರಿ ತಾಲೂಕಿನಲ್ಲಿ ಹದಗೆಟ್ಟ ಹಳ್ಳಿಗಳ ರಸ್ತೆಗಳು, ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ..!
- ರಾಣೇಬೆನ್ನೂರ್ ನಗರದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಇದ್ದು ಇಲ್ಲದಂತಾದ “ಸ್ತ್ರೀ ಶಕ್ತಿ ಭವನ” ದ ಕಟ್ಟಡ, ಸರ್ಕಾರದ ಹಣ ದುರ್ಬಳಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ಲಕ್ಷಕ್ಕೆ ಜನ ತತ್ತರ..!
- ರಾಣೆಬೆನ್ನೂರು ನಗರದಲ್ಲಿ ಡ್ಯಾಪ್ಕೋ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಆಯೋಜನೆ.
- ರಾಣೇಬೆನ್ನೂರ್ ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚು; ಕೆ. ಆರ್.ಉಮೇಶ್
- ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಭಾರತೀಯ ಜನತಾ ಪಕ್ಷದಿಂದ ಪ್ರತಿಭಟನೆ.
- “ಗೋಲ್ಡ್ “ರಾಬರಿ ಪ್ರಕರಣದಲ್ಲಿ ಇಬ್ಬರು ಪಿಎಸ್ಐಗಳ ಬಂಧನ.
- ರಾಣೇಬೆನ್ನೂರ ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಆಯೋಜನೆ.
- ರಾಣೇಬೆನ್ನೂರ ಹಾಸ್ಟೆಲ್ ಘಟಕ ವತಿಯಿಂದ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಕೆ.
- 🌾 ರಾಜ್ಯದಲ್ಲಿ ಮೆಕ್ಕೆಜೋಳಕ್ಕೆ ಕನಿಷ್ಠ ₹3000 ಬೆಂಬಲ ಬೆಲೆ ಘೋಷಿಸಲು ರಾಜ್ಯ ರೈತ ಸಂಘ ಆಗ್ರಹ.
- ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆದ ಅಧಿಕಾರಿಗಳು..!
- ಯಶಸ್ವಿ ಪತ್ರಕರ್ತನಾಗಲು ಇರಬೇಕಾದ ಅರ್ಹತೆ ಮತ್ತು ಜವಾಬ್ದಾರಿಗಳು.
- ಹಾವೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಅದ್ದೂರಿ ಆಚರಣೆ.
- ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆ, ಜನರ ದಾರಿ ತಪ್ಪಿಸಲು ಸಿಎಂ ಬದಲಾವಣೆ ಡ್ರಾಮಾ – ಎಚ್ ಡಿ ಕುಮಾರಸ್ವಾಮಿ
- ಹಾವೇರಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಲ್ಲದಿದ್ದರೆ ಎಸ್ಪಿ ಕಚೇರಿ ಎದರು ಉಗ್ರ ಪ್ರತಿಭಟನೆ ಎಚ್ಚರಿಕೆ – ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
- ರಟ್ಟಿಹಳ್ಳಿ ತಾಲೂಕು ಕಣಿವಿಸಿದ್ಗೇರಿ ಗ್ರಾಮದಲ್ಲಿ ಚಿರತೆ ದಾಳಿಗೆ ರೈತ ಬಲಿ.
- ಇಂದು ಮಹರ್ಷಿವಾಲ್ಮೀಕಿ ಜಯಂತಿ ಆಚರಣೆಯ ಮಹತ್ವ ಮತ್ತು ವಿಶೇಷತೆ,ಸಮಾಜಕ್ಕೆ ಸಂದೇಶ.
- ಕರ್ನಾಟಕದಲ್ಲಿ ಮರೆಮಾಚಾದ ಸರ್ಕಾರದ ನೇಮಕಾತಿಗಳು, ಅತಂತ್ರ ಸ್ಥಿತಿಯಲ್ಲಿ ಅಭ್ಯರ್ಥಿಗಳು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ.
- ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.
- ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಗೆ ಅದ್ದೂರಿ ಚಾಲನೆ.
- ಸಿದ್ದರಾಮಯ್ಯ ಆಪ್ತ ಕೆ ಎನ್ ರಾಜಣ್ಣನಿಗೆ ಬಿಜೆಪಿಗೆ ಬರುವಂತೆ ಆಫರ್ ಕೊಟ್ಟ ಶ್ರೀರಾಮುಲು.
- ಹೈಕಮಾಂಡ್ ಖಡಕ್ ಸೂಚನೆಯಂತೆ :ಸಿದ್ದು ಸಚಿವ ಸಂಪುಟದಿಂದ ಕೆಎನ್ ರಾಜಣ್ಣ ವಜಾ.
- ರಾಣೆಬೆನ್ನೂರು ನಗರದಲ್ಲಿ ಚಿರತೆ ಪ್ರತ್ಯಕ್ಷ : ಸೆರೆಹಿಡಿಯಲು ರೋಚಕ ಕಾರ್ಯಾಚರಣೆ.
- ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟ.
- ರಾಣೇಬೆನ್ನೂರ್ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯ,ನಗರಸಭೆ ಕಳ್ಳಾಟಕ್ಕೆ ಜನ ತತ್ತರ.
- ಸುಪ್ರೀಂ ಕೋರ್ಟ್ ನಿಂದ ರಿಂಗ್ ರೋಡ್ ಶುಭಾಗೆ ಜೀವಾವಧಿ ಶಿಕ್ಷೆ ಆದೇಶ ಪ್ರಕಟ.
- ಧರ್ಮಸ್ಥಳ ಸುತ್ತಮುತ್ತ ಶವಗಳ ಹೂತಿಟ್ಟ ಪ್ರಕರಣ: ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ.
- ಹಾವೇರಿ ಜಿಲ್ಲೆಗೆ ಮೊದಲ ಮಹಿಳಾ ಎಸ್ಪಿಯಾಗಿ ಯಶೋಧ ಎಸ್ ವಂಟಗೋಡಿ ಅಧಿಕಾರ ಸ್ವೀಕಾರ: ಜಿಲ್ಲೆಯಲ್ಲಿ ಹಲವು ಸಮಸ್ಯೆ, ಸವಾಲುಗಳು.
- ಧರ್ಮಸ್ಥಳ ಸರಣಿ ಹತ್ಯಾಕಾಂಡ ಕೇಸ್ ಕುರಿತು: ವಿಶೇಷ ತನಿಖಾ ತಂಡ (SIT)’ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಮಹಿಳಾ ಆಯೋಗದಿಂದ ಪತ್ರ.!
- ಸತ್ಯ ಹೇಳಲು ಬುಲೆಟ್ ಪ್ರೂಫ್ ಹಾಕಿಕೊಂಡು ಕೋರ್ಟಿಗೆ ಹಾಜರಾದ ದೂರುದಾರ.
- ಫೋಟೋ ತೆಗೆಯುವ ನೆಪದಲ್ಲಿ ಗಂಡನನ್ನೇ ನದಿಗೆ ತಳ್ಳಿದ ಹೆಂಡತಿ..!
- ರಾಜ್ಯ ಸರಕಾರದಿಂದ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ ಯೋಜನೆ ಜಾರಿ ..!
- ರಾಜ್ಯದ ಆಶ್ರಮ ಶಾಲೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ..!
- ರಾಜ್ಯದ ಆಶ್ರಮ ಶಾಲೆಗಳಲ್ಲಿ ಶಿಕ್ಷಣ ಮಾಪಿಯ..! “ಹಾವೇರಿ ಜಿಲ್ಲೆಯ ಆಶ್ರಮ ಶಾಲೆ ಪ್ರವೇಶಕ್ಕೆ ಶಾಸಕರ ರಿಕ್ಮಂಡ್ ಕಡ್ಡಾಯವಂತೇ..!
- ಅಕ್ಕೂರ್ ಮತ್ತು ಮರಡೂರ್ ಗ್ರಾಮಗಳ ಮಧ್ಯೆ ವರದಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಜ್ ಕಂ ಬ್ಯಾರೇಜ್ ಗೇಟ್ ಗಳನ್ನ ತೆರೆಯಲು ಮನವಿ.
- ರಾಣೆಬೆನ್ನೂರು ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಬಾಡಿಗೆ ವಾಹನ ಸೇವೆ ಒದಗಿಸಲು ಇ-ಪ್ರೊಕ್ಯುಮೆಂಟ್ ಮೂಲಕ ಟೆಂಡರ್ ಗೆ ಅರ್ಜಿ ಅಹ್ವಾನ.
- ಡಾ_ಎಂ_ಎ_ಸಲೀಂIPS ಅವರು ಕರ್ನಾಟಕದ ನೂತನ DGP ಯಾಗಿ ಅಧಿಕಾರ ಸ್ವೀಕಾರ.
- ಉತ್ತರಕರ್ನಾಟಕದ ಮಂದಿಗೆ ಸಿಎಂ ಸಿದ್ದರಾಮಯ್ಯರ ಮೇಲಿದ್ದ ಗೌರವ ಕಡಿಮೆ ಆಗಿತ್ತೇ….!
- ED ವಶದಲ್ಲಿ ಐಶ್ವರ್ಯ ಗೌಡ.
- ಹಾವೇರಿ ಬಿಇಒ ಮೌನೇಶ್ ಬಡಿಗೇರ್ ಲೋಕಾಯುಕ್ತ ಬಲಿಗೆ.
- Untitled
- ಉತ್ತರ ಕರ್ನಾಟಕದಲ್ಲಿನ ಅಕ್ರಮಗಳಿಗೆ ಕೊನೆ ಇಲ್ಲವೇ..! ಆಡಳಿತಲ್ಲಿ ಅಕ್ರಮ ತಡೆಯಲು ಮೇಜರ್ ಸರ್ಜರಿ ಯಾವಾಗ ಮಾನ್ಯ ಗೃಹ ಸಚಿವರೇ..!?
- ಕರ್ನಾಟಕದಲ್ಲಿ ಮುಖ್ಯಮಂತ್ರಿ ಸೇರಿದಂತೆ,ಸಚಿವ ಶಾಸಕರ ಸಂಬಳ ಹೆಚ್ಚಳಕ್ಕೆ ಅಧಿಕೃತ ಆದೇಶ ಪ್ರಕಟ.
- ಉತ್ತರ ಕರ್ನಾಟಕದಲ್ಲಿನ ಅಕ್ರಮಗಳಿಗೆ ಕೊನೆ ಯಾವಾಗ ಮಾನ್ಯ ಗೃಹ ಸಚಿವರೇ..!?
- ರಾಜ್ಯದಲ್ಲಿ ಕಾಂಗ್ರೆಸ್ಸಿನಿಂದ ಬೆಲೆ ಏರಿಕೆ ಯುಗಾದಿ ಗಿಫ್ಟ್ -ಆರ್.ಅಶೋಕ್ ಲೇವಡಿ
- ರಾಣೆಬೆನ್ನೂರು ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಬಾಡಿಗೆ ವಾಹನ ಸೇವೆ ಒದಗಿಸಲು ಅಲ್ಪಾವಧಿ ಟೆಂಡರ್ ಗೆ ಅರ್ಜಿ ಅಹ್ವಾನ.
- ಫೈಯರ್ ಬ್ರಾಂಡ್ , ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಗೆ ಯಡಿಯೂರಪ್ಪ ಕಾರಣ-ಜಯಮೃತ್ಯುಂಜಯ ಸ್ವಾಮೀಜಿ ನೇರ ಆರೋಪ.
- BIG BREAKING : ಉಪಸಭಾಪತಿ ರುದ್ರಪ್ಪ ಲಮಾಣಿ ಕಾರು ಅಪಘಾತ – ಸ್ಥಿತಿ ಗಂಭೀರ
- ಹಾವೇರಿ ಜಿಲ್ಲೆಯಲ್ಲೊಂದು ಲವ್ ಜಿಹಾದ್ ಶೆಂಕೆ “ನರ್ಸ್ ಸ್ವಾತಿ “ಮರ್ಡರ್ ಕೇಸ್,ನಯಾಜ್ ಪೊಲೀಸ್ ವಶಕ್ಕೆ ಮತ್ತಿಬ್ಬರಿಗಾಗಿ ಪೊಲೀಸರ ಶೋಧ. ಜಿಲ್ಲಾಧ್ಯಂತ ತೀವ್ರಗೊಂಡ ಹಿಂದೂ ಪರ ಸಂಘಟನೆಗಳ ಹೋರಾಟ.
- ಗೋಲ್ಡ್ ಸ್ಮೋಗ್ಲಿಂಗ್ ಕೇಸಿನಲ್ಲಿ ರಾವ್ ನ್ಯಾಯಾಂಗ ಬಂಧನ
- ರಾಜ್ಯ ಬಜೆಟ್ಟಿನಲ್ಲಿ ಹಾವೇರಿ ಜಿಲ್ಲೆಗೆ ಕೊಟ್ಟಿದ್ದಷ್ಟು..!?
- ಹಾವೇರಿ ಜಿಲ್ಲೆ ಮೂಲದ ಹೆಮ್ಮೆಯ ಐಎಎಸ್ಅಧಿಕಾರಿಗಳು
- ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ, ಎನ್ ಹೆಚ್ ಎಂ ಗುತ್ತಿಗೆ ನೌಕರರ ಪ್ರತಿಭಟನೆ.
- “ರಾಯಲ್ ಸಿಟಿ” ರಾಣೆಬೆನ್ನೂರು ಗಾರ್ಬೇಜ್ ಸಿಟಿ ಆಗುವ ಮುನ್ನ,ಎಚ್ಚೆತ್ತುಕೊಳ್ಳದ ನಗರ ಸಭೆ ಅಧಿಕಾರಿಗಳು ..!
- “ಹಿರೇಕೆರೂರು, ರಟ್ಟೀಹಳ್ಳಿ ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ,Dr.ವಿಜಯ ಮಹಾಂತೇಶ್ ದಾನಮ್ಮನವರ್ ದಿಡೀರ್ ಭೇಟಿ, ದಾಖಲೆಗಳ ಪರಿಶೀಲನೆ.
- ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ಕೊಡ್ತಾರಾ?
- ಕ್ಯಾನ್ಸರ್ ಮಾನವ ದೇಹ ಹೊಕ್ಕೋದು ಹೀಗೆ! ಇಷ್ಟು ದಿನ ನೀವಂದುಕೊಂಡಿರೋ ಹಾಗಲ್ಲ!
- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಕೋರ್ಟ್ ರಿಲೀಫ್
- ಹಾವೇರಿ ಜಿಲ್ಲಾ ಪಂಚಾಯತ್ ಗೆ ಹೊಸ ‘CEO ಅಧಿಕಾರ ಸ್ವೀಕಾರ.
- ಹಾವೇರಿ ಜಿಲ್ಲಾ ಪಂಚಾಯತ್ ಗೆ ಹೊಸ ‘CEO ಅಧಿಕಾರ ಸ್ವೀಕಾರ.
- ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು
- ದಿಲ್ಲಿ ವಿಧಾನಸಭಾ ಚುನಾವಣೆ ಸೋಲು ಆಪ್ ನ ಅಂತ್ಯದ ಆರಂಭ: ಪ್ರಶಾಂತ್ ಕಿಶೋರ್
- ಜಾತಿ, ಭಾಷೆ, ಪ್ರಾಂತ್ಯ ಭಿನ್ನಾಭಿಪ್ರಾಯ ಬಿಟ್ಟು ಹಿಂದೂಗಳು ಒಂದಾಗಿ:ಮೋಹನ್ ಭಾಗವತ್
- ದಸರಾ ಹಿನ್ನೆಲೆ| ಬೆಂಗಳೂರು – ಮಂಗಳೂರು – ಕಾರವಾರ ಮತ್ತು ಮೈಸೂರು – ಕಾರವಾರ ನಡುವೆ ವಿಶೇಷ ರೈಲು
- ಬಿಜೆಪಿ ಯಿಂದ ಅವಹೇಳನ ಆರೋಪ ದಿನೇಶ್ ಗುಂಡೂರಾವ್ ಪತ್ನಿ ದೂರು
- ಸ್ವಂತ ಮನೆ ಕನಸ್ಸು ಕಾಣುತ್ತಿರುವವರಿಗೆ ಶುಭ ಸುದ್ದಿ – ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೋಂದಣಿ ಆರಂಭ – ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ವಿವರ
Namma Haveri 24X7 News
Bureau Report
ಹಾವೇರಿ ಜಿಲ್ಲೆಯಲ್ಲೊಂದು ಲವ್ ಜಿಹಾದ್ ಶೆಂಕೆ “ನರ್ಸ್ ಸ್ವಾತಿ “ಮರ್ಡರ್ ಕೇಸ್,ನಯಾಜ್ ಪೊಲೀಸ್ ವಶಕ್ಕೆ ಮತ್ತಿಬ್ಬರಿಗಾಗಿ ಪೊಲೀಸರ ಶೋಧ. ಜಿಲ್ಲಾಧ್ಯಂತ ತೀವ್ರಗೊಂಡ ಹಿಂದೂ ಪರ ಸಂಘಟನೆಗಳ ಹೋರಾಟ.
ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.









































