Namma Haveri 24X7 News

Bureau Report

ಹಾವೇರಿ ತಾಲೂಕಿನಲ್ಲಿ ಹದಗೆಟ್ಟ ಹಳ್ಳಿಗಳ ರಸ್ತೆಗಳು, ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ..!

ಹಾವೇರಿ : ರಸ್ತೆಗಳು ಆ ನಗರ ಮತ್ತು ಹಳ್ಳಿಗಳ ಜೀವನಾಡಿ. ಅಭಿವೃದ್ಧಿಯ ಸಂಕೇತ.ವ್ಯಾಪಾರ,ವಾಣಿಜ್ಯ ಸಂಚಾರಕ್ಕೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಇರುವ ನರನಾಡಿಗಳು. ಅವುಗಳು ಶುದ್ಧವಾಗಿದ್ದಾಗಲೇ ಆ ನಗರ ಪ್ರದೇಶ ಅಭಿವೃದ್ಧಿ ಹೊಂದಿದೆ ಎಂದು ಭಾವಿಸಬಹುದು.

ಇಷ್ಟೆಲ್ಲಾ ನಿಮಗೇಕೆ ಹೇಳುತ್ತಿದ್ದೇನೆ ಎಂದರೆ ನೀವು ಯಾವಾಗಲಾದರೋ ಗುತ್ತಲ- ನೆಗಳೂರು ಮಾರ್ಗ ಮತ್ತು ನೆಗಳೂರು -ಹೊಸರಿತ್ತಿ ಮಾರ್ಗ, ಹೊಸರಿತ್ತಿ -ಅಕ್ಕೂರ್ ಮಾರ್ಗ, ಗುತ್ತಲ- ಹಾವೇರಿ ಮಾರ್ಗ ಸಂಚರಿಸಿದ್ದೀರಿ ಅಂದರೇ ನಿಮಗೆ ಒಂದು ಅನುಭವ ಬಂದಿರುತ್ತೆ.

ಹಾವೇರಿ ತಾಲೂಕಿನ ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಡಳಿತ, ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಅಷ್ಟೇ ಏಕೆ ಈ ರಾಜ್ಯದ ಉಪಸಭಾಪತಿ ರುದ್ರಪ್ಪ ಲಮಾಣಿ ಯವರ ತವರು ಜಿಲ್ಲೆ ಹಾವೇರಿ. ಆ ತಾಲೂಕು ಶಾಸಕರು ಕೂಡಾ ಹೌದು. ಮಾನ್ಯ ಶಾಸಕರು ಎಂದಾದರೂ ಈ ರಸ್ತೆಯಲ್ಲಿ ಸಂಚರಿಸಿದರೋ ಇಲ್ಲವೋ ಗೊತ್ತಿಲ್ಲ ಅಥವಾ ಹೋಗಿದ್ದರೂ ಸುಮ್ಮನಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

ಈ ಭಾಗದ ಜನ ಏನ್ ಕರ್ಮ ಮಾಡಿದ್ದಾರೋ ಗೊತ್ತಿಲ್ಲ. ಆಡಳಿತ ವರ್ಗ ಮತ್ತು ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುವುದಂತು ಗ್ಯಾರಂಟಿ. ಇದು ಇವತ್ತಿನ ಕಥೆಯಲ್ಲ ಸುಮಾರು ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವುದು ದುರಂತದ ಸಂಗತಿ. ಇಲ್ಲ ಅಭಿವೃದ್ಧಿ ಮಾಡಿದ್ದೀವಿ ಎಂದು ಗುಳುಂ – ಸ್ವಾಹ ಎಂಬ ಯೋಜನೆ ಜಾರಿಯಲ್ಲಿ ಇದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಮುಂದೆ ಆದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇತ್ತ ಕಡೆ ಗಮನಹರಿಸಿ ತಗ್ಗು- ಗುಂಡಿ ಬಿದ್ದ ರಸ್ತೆಗಳನ್ನು ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924